ಕಾಸರಗೋಡು: ಬೆಂಗಳೂರು ಸರಣಿ ಸ್ಫೋಟ ಮತ್ತು ದಕ್ಷಿಣ ಭಾರತದ ವಿವಿಧೆಡೆ ಹರಡಿರುವ ಉಗ್ರಗಾಮಿ ನಂಟು ಹೊಂದಿದ ಮತ್ತೋರ್ವನನ್ನು ಕಾಸರಗೋಡಿನಿಂದ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.
ಆದಿತ್ಯವಾರ ಸಂಜೆ 6.30ಕ್ಕೆ ಚೆಮ್ನೂಡ್ ಸಮೀಪದ ಚೆಂಬರಿಕ ಕಡಲ ತೀರದ ಬಾಡಿಗೆ ಕ್ವಾರ್ಟಸ್ ಗೆ ಕರ್ನಾಟಕ ಉಗ್ರ ನಿಗ್ರಹ ದಳದ ತಂಡ ಧಾಳಿ ನಡೆಸಿ ಓರ್ವನನ್ನು ಕಸ್ಟಡಿಗೆ ತೆಗೆದುಕೊಂಡರು. ಈತ ತಮಿಳುನಾಡು ನಿವಾಸಿಯಾಗಿದ್ದು, ತಮಿಳು ಮಾತ್ರವೇ ಮಾತನಾಡುತ್ತಿರುವುದಾಗಿ ಇಲ್ಲಿನ ನಾಗರಿಕರು ತಿಳಿಸಿದ್ದಾರೆ.
ಈ ಧಾಳಿಯ ಅಲ್ಪ ಹೊತ್ತಿನ ಬಳಿಕ ನಿಗ್ರಹ ದಳದ ಇನ್ನೊಂದು ತಂಡ ನಡೆಸಿದ ದಾಳಿಯಲ್ಲಿ ಮತ್ತೋರ್ವನನ್ನು ಕಸ್ಟಡಿಗೆ ತೆಗೆದಿರುವುದಾಗಿ ಹೇಳಲಾಗುತ್ತಿದೆ. ಒಂದು ವಾರದ ಹಿಂದೆ ಕಾಸರಗೋಡಿನ ಟ್ರಾವೆಲ್ಸ್ ಏಜೆನ್ಸಿಯೊಬ್ಬರ ನೆರವಿನಿಂದ ಈ ಬಾಡಿಗೆ ಮನೆ ಖರೀದಿಸಿ ಕೊಂಡಿದ್ದು ಇಲ್ಲಿ ಇಬ್ಬರು ವಾಸಿಸುತ್ತಿದ್ದಾರೆನ್ನಲಾಗಿದೆ. ಇವರಿಬ್ಬರು ಕರ್ನಾಟಕ ಪೊಲೀಸ ವಶದಲ್ಲಿದ್ದು, ಉಗ್ರಗಾಮಿ ನಂಟು ಮತ್ತು ವಿದ್ವಂಸಕ ಕೃತ್ಯದ ಪ್ರಮುಖ ಮಾಹಿತಿಗಳು ತನಿಖಾದಳಕ್ಕೆ ದೊರೆತಿದೆಯೆಂದು ತಿಳಿದುಬಂದಿದೆ.
Subscribe to:
Post Comments (Atom)
Video

0 comments:
Post a Comment