ನೆನಪುಗಳ ಮಾತು ಮಧುರ
ಕಲ್ಪನೆಯಲ್ಲಿ ಅರಮನೆ ಕಟ್ಟುವ ಕನಸು ಕಾಣಬಹುದಾದಂತ ಒಂದು ಚಿಕ್ಕ ಚೊಕ್ಕದಾದ ಕೋಣೆ ಎರಡನೆ ಮಹಡಿಯಲ್ಲಿತ್ತು. ಅದು ನನ್ನ ಬೆಂಗಳೂರು ಜೀವನದ ಆರಂಭದ ದಿನಗಳು ಪಕ್ಕದ ಮನೆ ಯತೀಶ ಇನ್ನೂ ಹೈಸ್ಕೂಲು ನನಗೆ ಮುದ್ದೆ ತಿನ್ನಿಸಿ ಅವನು ಆಮ್ಲೇಟ್ ಕದ್ದು ತಿನ್ನಲು ಶುರುಮಾಡಿದ್ದ.
ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಡಿ.ಎಫ್.ಎ ಕೋರ್ಸ್ ಗಾಗಿ ದಿನಾ ಹೋಗುತ್ತಿದ್ದೆ. ಕಾಲೇಜಿಗು ಅಲ್ಲಿಗೂ ವೆತ್ಯಾಸ ಕಾಣಲಿಲ್ಲ. ಒಂದು ವರ್ಷ ಹಾಗೂ ಹೀಗೂ ಕಳೆಯಿತು. ಆಗ ಒಬ್ಬರು ಗುರುಗಳು ಸಿನಿಮಾ ಮಾಡಲು ಬೆಳ್ತಂಗಡಿ,ಚಿಕ್ಕಮಗಳೂರು,ಉಡುಪಿಯಲ್ಲಿ ಲೊಕೇಶನ್ ಬೇಕಯ್ಯ ಎಂದರು.
ನಮ್ಮೂರಲ್ಲಿ ಶೂಟಿಂಗ್ ಮಾಡ್ತಾರೆ.. ಸಹಾಯಕ್ಕೆ ತಕ್ಕ ಹಾಗೆ ಒಂದು ಪಾತ್ರ ಗ್ಯಾರೆಂಟಿ ಅಂದ್ಕೊಂಡೆ.. ಊಹಾಪೋಹಗಳ ತಾರಾಗಣವೇ ಅದ್ಧೂರಿಯಾಗಿತ್ತು. ನಾಳೆ ಅವ್ರು ಬರ್ತಾರೆ .. ನಾಡಿದ್ದು ಇವ್ರು ಬರ್ತಾರೆ... ಈ "ರೆ" ಗಳ ಮಧ್ಯದಲ್ಲಿ ನಾವು ನಾಲ್ಕು ಜನ ಹುಡುಗರ ಶೂಟಿಂಗ್ ಮಾತ್ರ ನಿರಾತಂಕವಾಗಿ ನಡೀತಿತ್ತು. ಅದು ಹಲಸಿನ ಹಣ್ಣಿನ ಸೀಸನ್ ಭಾರವಾದ ಹಲಸಿನ ಹಣ್ಣುಗಳನ್ನು ಹೆಗಲ ಮೇಲೆ ಹೊತ್ತು ತಂದಿದ್ದೇ ತಂದಿದ್ದು..ರಾತ್ರಿಯಾದರೆ ಅವೆಲ್ಲ ಯರ್ಯಾರದೋ ಹೊಟ್ಟೆ ಸೇರುತ್ತಿತ್ತು.
ಹೀಗೆ ಮಂಗಳೂರು, ಸೋಮೇಶ್ವರದ ಮರಳಲ್ಲಿ ಉರುಳಾಡಿಸಿ ಮರುಳು ಮಾಡಿ ಮಲ್ಪೆಯ ಮೀನಿನ ವಾಸನೆಯ ಬಲೆಯಲ್ಲಿ ಬೀಳಿಸಿದರು... ಆ ರಾತ್ರಿ ಒಂದು ಲಾಡ್ಜಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರು. ರಾತ್ರಿಯೆಲ್ಲ ಏನೇನೋ ಚಿತ್ರವಿಚಿತ್ರ ಸದ್ದುಗಳು.. (ಅವು ಏನೆಂದು ಇಂದಿಗೂ ಅರ್ಥವಾಗಿಲ್ಲ) ಹೆದರಿ ಹಲಸಿನ ಹಣ್ಣು ಹೊತ್ತಲ್ಲಿಗೆ ಬಂದೆವು ಅಲ್ಲಿ ನಾಲ್ಕು ದಿನದ ಹಿಂದಿನ ರಚ್ಚೆ (ಹಲಸಿನಹಣ್ಣಿನ ಸಿಪ್ಪೆ) ಮೇಲೆ ಬೇಕಾದಷ್ಟು ಸೊಳ್ಳೆ ನೊಣಗಳು ಕೂತಿದ್ದವು...
ನಮ್ಮನ್ನು ಆಣಕ ಮಾಡಲೆಂಬಂತೆ ಒಂದು ಮನೆಯಲ್ಲಿ ಮಲಗಲು ವ್ಯವಸ್ಥೆಯಾಯಿತು. ಭೀಮಣ್ಣ ಎಂಬ ಸಾಹಾಯಕ ನಿರ್ದೇಶಕರಿಗೆ ಮಾತ್ರ ಲಾಡ್ಜ್ ನ ವಿಚಿತ್ರ ಸದ್ದು ತರಿಸಿದ್ದ ಜ್ವರ ಇಲ್ಲಿ ಮತ್ತೆ ಜಾಸ್ತಿಯಾಯಿತು. ಎಲ್ಲರೂ ಭೀಮಣ್ಣನಿಗೆ ದೆವ್ವ ಮೆಟ್ಕೊಂಡಿದೆ (ಹಿಡಿದಿದೆ) ಅಂದು ಪೊರಕೆ ಚಪ್ಪಲಿ ಸೇವೆ ನೆರವೇರಿಸಿ ನಿಜ ಜ್ವರ ಬರಿಸಿದರು. ಅವನ ತುಟಿಯಲ್ಲಿ ರಕ್ತ ಜಿನುಗುತ್ತಿತ್ತು. ದೆವ್ವ ಸೇಡು ತೀರಿಸಬಾರದೆಂದು ರಾತ್ರಿ ಎರಡು ಪಾಳಿಯಲ್ಲಿ ಎರಡು ತಂಡ ಅವನ ಎದುರುಗಡೆ ಚಪ್ಪಲಿ ಪೊರಕೆ ಇಟ್ಟು ಕಾಯುತ್ತಿತ್ತು...ಅವನ ನೋವಿನ ನರಳಾಟ ಮಿಕ್ಕವರಿಗೆ ದೆವ್ವದ ಗೊಣಗಾಟವಾಗಿತ್ತು.
ನಮ್ಮವರಲ್ಲೊಬ್ಬ ಕಿಟಕಿಗೊರಗಿ ಕುಳಿತಿದ್ದ. ದೂರದ ಸ್ಟ್ರೀಟ್ ಲೈಟ್ ನ ಬೆಳಕು ಒಳಗೆ ಅಲ್ಪ ಸ್ವಲ್ಪ ಚೆಲ್ಲಿತ್ತು. ಸ್ವಲ್ಪ ಹೊತ್ತಿಗೆ ಬ್ರಹದಾಕಾರದ ನೆರಳೊಂದು ಕೋಣೆ ಒಳಗೆ ಪ್ರವೇಶಿಸಿ ಕಿಟಕಿಗೊರಗಿದವನ ಹಿಂದೆ ಬಂದು ನಿಂತಾಗ ಅಕಸ್ಮಾತ್ ಅವನ ಕೈ ಹಿಂದೆ ಸರಿದು ಆಕೃತಿಯ ನೆತ್ತಿ ಮೇಲೆ ಸ್ಪರ್ಶಿಸಿದಾಗ ಕಿರುಚಾಡಿದ.... ನೋಡಿದರೆ ಅದು ಮನೆ ದಣಿಯ ಕೂದಲಿಲ್ಲದ ತಲೆ.. ಭೀಮಪ್ಪನ ಅವಸ್ಥೆ ಕಂಡು ಜ್ವರದ ಮಾತ್ರೆ ಕೊಟ್ರು.
ಅದೇನೋ ಭೀಮಣ್ಣನ ಜ್ವರವನ್ನು ಓಡಿಸ್ತು ಆದ್ರೆ ಅವ್ರು ತಂದ ಸುದ್ಧಿ ನಮ್ಮನ್ನು ಬೆಂಗಳೂರಿಗೇ ಅಟ್ಟಿಸಿಬಿಡ್ತು. ಅದೇನೆಂದ್ರೆ ಆಗಿನ ಪ್ರಧಾನ್ ಮಂತ್ರಿ ರಾಜೀವ್ ಗಾಂಧಿಯ ಹತ್ಯೆ.. ಹೊತ್ತ ಹಲಸಿನ ಹಣ್ಣಿನ ಮುಳ್ಳು ಈಗಲೂ ಚುಚ್ಚುತ್ತಿರುವ ಭಾವ.. ಮಲ್ಪೆಯ ಮೀನಿನ ಬಲೆಗಳು ಸುತ್ತಿಕೊಂಡ ಭಾವ...ಎಲ್ಲರೂ ಹಾಗಾಗೇ.. ಹಸಿ ಹಸಿ ನೆನಪಿನ ವಾಸನೆ..ಯಾಕ್ ಗೊತ್ತ? ಕ್ಯಾಮರಾ ರೀಲಿಲ್ಲದೆ ತಿರುಗುತ್ತಿತ್ತಂತೆ. ಸಿನಿಮಾದ ಹೆಸರು"ದೂರದ ಕನಸು". ಒಂದಷ್ಟು ಒಳ್ಳೆಯ ಗೆಳತನವನ್ನು ಕದಡಲು ಒಂದು ಶೂಟಿಂಗ್.. ಇದರಿಂದಾಗಿ ನಾನು ಊರ ಸಂಪರ್ಕ ಕಡಿದುಕೊಂಡ " ಅಲ್ಪ" ಅವಧಿ ಕೆಲವು ವರ್ಷಗಳು.
-ವಿನು ಬಳಂಜ
net photo
Subscribe to:
Post Comments (Atom)
Video

12 comments:
Good write up
Wonderful
Last week only created enthusiasm. Really fantastic.
Congrats ekanau.ekanasu worked very hard. We are proud to be ekanasu first kannada internet paper of mangalore,you r inspiration . GOD BLESS YOU LET ALL YOUR DREAMS COME TRUE...
really impressing one. Lekhana manasige muda needithu.
thumba chennagide... vinu balanja avare jogulavu chennagide..nice write up
-jayant k.n bangalore
nice to see vinu balanja in his column... thanks for ekanasu... i liked...
Superb write up............
Ram
i liked the article...jogula is supr
shankar hubli
Good one
Nenapugala mathu nijakku madura anubhava. Nimma nenapugalannu namma jathe hanchikolluthiruvudu nijakku santasada vichara. Nimma e prayatna munduvariyali. Ekanasu ide tara hosa hosa prayatnagalannu maduthirali. Namage hosa hosa barahagalu labhisali.
Hageye ekanasige 100ra shubhashayagalu
raja shekar
U.K,Mangalore
Good work Eekanasu...keep it up. wish u all succses for ur future projects. may god bless you. And there is nothing to say about Vinu Sir's writings he is geneous :-)
Regards,
Jyothi Rai
Post a Comment