ರಾಜ್ಯ - ರಾಷ್ಟ್ರ
ನವದೆಹಲಿ: ಲೋಕಸಭಾ ಚುನಾವಣೆಯ ನಂತರ ಮೊದಲ ಬಾರಿಗೆ ಸಂಸತ್ ಅಧಿವೇಶನ ಇಂದಿನಿಂದ ಪ್ರಾರಂಭಗೊಳ್ಳಲಿದ್ದು ಲಿಬರ್ಹಾನ್ ವರದಿ ಮತ್ತು ಲಾಲ್ ಗಢದಲ್ಲಿನ ವಿದ್ಯಮಾನಗಳು ತೀವ್ರ ಚಚರ್ೆಗೆ ಕಾರಣವಾಗುವ ಮೂಲಕ ಅಧಿವೇಶನ `ಕಾವೇರುವ ' ನಿರೀಕ್ಷೆಯಿದೆ. ಆಥರ್ಿಕ ಸಮೀಕ್ಷೆಯ ವರದಿ ಇಂದು ಸಂಸತ್ ನಲ್ಲಿ ಮಂಡನೆಯಾಗಲಿದೆ. ಜುಲೈ 3ರಂದು ರೈಲ್ವೇ ಬಜೆಟ್ ಹಾಗೂ 6ರಂದು ಹಣಕಾಸು ಬಜೆಟ್ ಮಂಡನೆಯಾಗಲಿದೆ.ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲಾದ ಜನಾಂಗೀಯ ದಾಳಿ , ಮುಂಗಾರು ವಿಳಂಬದಿಂದ ರಾಷ್ಟ್ರದಲ್ಲಿ ಉದ್ಭವಿಸಿದ ಪರಿಸ್ಥಿತಿ ಚರ್ಚೆಗೆ ಬರುವ ಸಾಧ್ಯತೆಗಳಿವೆ.
Subscribe to:
Post Comments (Atom)



0 comments:
Post a Comment