ಈ ಕನಸು

ಇದು ವರ್ಷದ ಕನಸು

ಜನರ ಬಳಿಗೆ ಈ ಕನಸು.ಕಾಂ. ನಿಮ್ಮ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಪರಿಹಾರದ ಪ್ರಯತ್ನ...ನಿರೀಕ್ಷಿಸಿರಿ... ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ವಿಶೇಷ ವರದಿ

ಎಲ್ಲಾ ಮಕ್ಕಳಂತೆ ಇಲ್ಲೊಬ್ಬ ಬಾಲಕ ಶಾಲೆಗೆ ಹೋಗುತ್ತಾನೆ. ಅದರಲ್ಲೇನಿದೆ ವಿಶೇಷ ಅಂತೀರ. ಇದೆ.... ಇಲ್ಲೇ ಇರೋದು ಫುಲ್ ಕತೆ. ಈತ ಬೆಳಗ್ಗೆದ್ದು ರಬ್ಬರ್ ಕೆಲಸ ಮಾಡಿ ಆ ಬಳಿಕ ಶಾಲೆಗೆ ಹೋಗುತ್ತಾನೆ. ಆದ್ರೆ ಆತನ ವಯಸ್ಸು ಇನ್ನೂ 7...!!. ಈಗಷ್ಟೇ ಶಾಲೆಗೆ ಸೇರಿದ್ದಾನೆ.ಒಂದನೇ ತರಗತಿಯಲ್ಲಿ ಓದುತ್ತಾನೆ. ಈ ಹುಡುಗನ ಹೆಸರು ವಸಂತ. ಈತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಬಳಿಯ ಮುಂಡೂರು ಪಳಿಕೆಯ ನಿವಾಸಿ..

ಬೆಳ್ತಂಗಡಿ ತಾಲೂಕು ಕೊಕ್ಕಡ ಬಳಿಯ ಮುಂಡೂರುಪಳಿಕೆಯ ರಾಮಸ್ವಾಮಿ ಹಾಗೂ ಕಮಲ ದಂಪತಿಗಳ ಪುತ್ರನಾದ ಈ ಬಾಲಕನ ಹೆಸರು ವಸಂತ. ಇನ್ನೂ ಏಳು ಏಳು ವರ್ಷದ ಪೋರ.ಈಗಷ್ಟೇ ಒಂದನೇ ತರಗತಿಗೆ ಸೇರಿಕೊಂಡಿದ್ದಾನೆ. ಈತ ಬೆಳಗ್ಗೆದ್ದು ತಾಯಿಯೊಂದಿಗೆ ರಬ್ಬರ್ ಕೆಲಸದಲ್ಲಿ ತೊಡಗಿಸಿಕೊಂಡು ಆ ಬಳಿಕ ಶಾಲೆಗೆ ಹೋಗುವುದು ಈತನ ನಿತ್ಯದ ಕಾಯಕ. ಈ ಬಾಲಕನ ಹೆತ್ತವರು ರಬ್ಬರ್ ಟ್ಯಾಪಿಂಗ್ ಕಾರ್ಮಿಕರು. ಈತನ ತಂದೆಗೆ ಕೊಂಚ ಅಸೌಖ್ಯವಿತ್ತು.

ಹಾಗಾಗಿ ತಾಯಿಯೊಂದಿಗೆ ಈ ಬಾಲಕ ರಬ್ಬರ್ ಟ್ಯಾಪಿಂಗ್ ಮಾಡಿದ ಬಳಿಕ ಶಾಲೆಗೆ ಹೋಗುತ್ತಾನೆ.ಈತನ ತಂಗಿ 6 ವರ್ಷದ ವಸಂತಿ ಕೂಡಾ ಅಣ್ಣನೊಂದಿಗೆ ಸೇರಿಕೊಳ್ಳುತ್ತಾಳೆ.ಬೆಳಗ್ಗೆ ಸ್ಥಳೀಯರು ಏಳುವ ಮೊದಲೇ ಈ ಬಾಲಕ ಎದ್ದು ರಬ್ಬರ್ ತೋಟದಲ್ಲಿರುತ್ತಾನೆ. ತನ್ನ ಮನೆಯವರ ಕಾಯಕದೊಂದಿಗೆ ಕೈಜೋಡಿಸಿ ಆ ಬಳಿಕ ಶಾಲೆಗೆ ಹೋಗುತ್ತಾನೆ. ಹೀಗಾಗಿ ಈ ಬಾಲಕ ಉಳಿದ ಮಕ್ಕಳಂತಲ್ಲ ಭಿನ್ನವಾಗಿ ಕಾಣುತ್ತಾನೆ .

ಈ ಮಧ್ಯೆ ಈತನ ತಂದೆ ರಾಮಸ್ವಾಮಿಗೆ ಕೊಂಚ ಹುಷಾರಿಲ್ಲ.ವಲಸೆ ಹೋಗಿ ಕೆಲಸ ಮಾಡುವ ಬದುಕು ಇವರಸು.ಇದು ಈ ಏಳು ವರ್ಷದ ಬಾಲಕ ವಸಂತನ ಮೇಲೆ ತೀರಾ ಪರಿಣಾಮ ಬೀರಿತ್ತು ಹಾಗಾಗಿ ಈತನೂ ಅದೇ ಕಾಯಕ್ಕೆ ಇಳಿದಿದ್ದ.ಇದನು ಗಮನಿಸಿದ ಇಲ್ಲಿನ ಸಮೀಪದ ಶಾಲಾ ಅಧ್ಯಾಪಕರು ಈತನನ್ನು ಶಾಲೆಗೆ ಸೇರುವಂತೆ ಮಾಡಿದರು. ಆದರೆ ಅಲ್ಲೂ ಆ ಬಾಲಕ ಅತ್ಯಂತ ಉತ್ಸಾಹದಿಂದ ಪಾಠವನ್ನು ಕೇಳುತ್ತಿದ್ದ ಮತ್ತು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ. ಹಾಗಾಗಿ ವಸಂತ ಅತ್ತ ಬೆಳಗ್ಗೆ ಮನೆಯಲ್ಲಿ ರಬ್ಬರ್ ಟ್ಯಾಪಿಂಗ್ ಮಾಡಿ ಶಾಲೆಗೆ ಬರುತ್ತಾನೆ.
ಒಟ್ಟಿನಲ್ಲಿ ಬಹುತೇಕ ಮಕ್ಕಳಿಗೆ ಪಾಠದ ಚಿಂತೆ ಮಾತ್ರಾ ಇದ್ದರೆ ಈ ಬಾಲಕ ವಸಂತನಿಗೆ ಶಾಲೆಯ ಜೊತೆಗೆ ತನ್ನ ದೈನಂದಿನ ಕೆಲಸವಾದ ರಬ್ಬರ್ ಟ್ಯಾಪಿಂಗ್ನಲ್ಲೂ ಚಿಂತೆ ಇದೆ. ಮನೆಯಯವರ ಕೆಲಸಕ್ಕೆ ಹೆಗಲು ಕೊಡುವ ಕಾಯಕವನ್ನು ಮಾಡುವ ಈ ಬಾಲಕ ಮಾತ್ರಾ ಅಸಾಮಾನ್ಯ.....

ಮಹೇಶ್ ಪುಚ್ಚಪ್ಪಾಡಿ

2 comments:

Anonymous said...

naavu beledaddu intheye .....andu adu saamaanya ......indu maathra asaamaanya.......

Anonymous said...

vasanth..i wish him all the very best.bere kashta pattu vodi beleyuvantha makkalige adarshanagiddane..naanu heegebeldiddu...sthaleeyaru matthe nagareekaru intha makkalannu guruthisi prothsahisabeku....wishes and regards..RJ AVINASH,BIG92.7FM,MANGALORE

Post a Comment