ಸಾಹಿತ್ಯ
ಕಡಲುಕ್ಕಿ ನೀರ ನೊರೆ
ಉಗಿಯಾಗಿ ಗಾಳಿಯಲಿ
ಮುಗಿಲಾಗಿ ಬಾನಲ್ಲಿ
ನೆಲೆಗಿಳಿದು ಹನಿಯಾಗಿ
ಮಳೆಯಾಗಿತ್ತು ಬದುಕು
ಹನಿಯು ನೆಲೆಗಿಳಿದು
ಮಣ್ಣ ಹಸಿಯಾಗಿ
ಹಸಿರ ಹುಸಿರಾಗಿ
ಬದುಕು ಹಸನವಾಗಿ
ಸಾಗಿತ್ತು ಜಗದ ಮಾಯೆ.
ಎಂತಕೋ ಮುನಿಸಿದು
ಕಡಲು ಮೊರೆಯಿತು
ಮೋಡ ಮುಸಿಕಿತು
ಹನಿಯು ಬಿರಿದಿತು
ನೀರು ನೆರೆಯಾಯ್ತು
ತೊರೆಹಳ್ಳ ಹೊಳೆಯಾಗಿ
ಹೊಳೆಯು ಹುಚ್ಚಾಗಿ
ನೆರೆ ನಿಟ್ಟುಗೆಟ್ಟು
ಕೊಚ್ಚಿ ಕೊಂಡೊಯ್ತು
ಬದುಕನು ಮಾಯೆ!
ನಿಂತ ಬೆಳೆ ನೀರಾಗಿ
ನೀರಾಲ್ಲೇ ಮುಳಿಗೋಗಿ
ಕೂಳೇ ಇಲ್ಲದಾಗಿ
ಬಾಳೇ ಗೋಳಾಯ್ತು
ಇಂದು ನಾಳೆ ಮಾಯೆ!
ಯಾರು ಹೊಣೆಯಾರು
ಮಾಹೆಯ ಮುನಿಸಿಗೆ?
ಎನ್ನೆದೆಯೊಳಗೆ ಪಿಸುಗುಟ್ಟಿತು
ಮಾತಿಲ್ಲದೆ ಕಂಗು
ನಿನ್ನ ಬದುಕಿನ ಶೈಲಿಯೆಂದು!
- ಕುಮಾರಸ್ವಾಮಿ ಕಡಾಕೊಳ್ಳ
Subscribe to:
Post Comments (Atom)



2 comments:
Heartch touching lines.
Specially that last pyara,
Kindling our life style….
Superb….
Regards,
Kirankumar Gatty
:) thumba chennagide... intense feelings !
Post a Comment