ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂ...ಇದೀಗ 5ನೇ ವರುಷಕ್ಕೆ ಪಾದಾರ್ಪಣೆ...ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ... ಬಳಿಗೆ ಈ ಕನಸು.ಕಾಂ. ನಿಮ್ಮ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಪರಿಹಾರದ ಪ್ರಯತ್ನ...ನಿರೀಕ್ಷಿಸಿರಿ... ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com
12:51 PM

ಆಹಾರ ಪೂರಕ - ಮಾರಕ

Posted by ekanasu

ಆರೋಗ್ಯ
ನಾವು ಸ್ವೀಕರಿಸುವ ಆಹಾರ ಎಷ್ಟರ ಮಟ್ಟಿಗೆ ನಮ್ಮ ದೇಹಕ್ಕೆ ಪೂರಕವಾಗಿವೆ...ಎಷ್ಟು ಮಾರಕವಾಗಿದೆ ಎಂಬುದನ್ನು ನಾವೆಷ್ಟು ಚಿಂತಿಸಿದ್ದೇವೆ? ಅಥವಾ ಚಿಂತಿಸುತ್ತಿದ್ದೇವೆ? . ಇಂದು ಆಹಾರ ಸೇವನೆಯೂ ಒಂದು ಫ್ಯಾಶನ್ ಎಂಬಂತಾಗಿದೆ. ನಾವು ಇಂತಹ ಆಹಾರ ಸೇವನೆ ಮಾಡದಿದ್ದರೆ ನಮ್ಮನ್ನು ಇತರರು ಕೀಳಾಗಿ ಕಾಣುತ್ತಾರೆಂಬ ಭಾವನೆ ಇಂದಿನ ಜನತೆಯದ್ದು. ಆರೋಗ್ಯದತ್ತ ಕಾಳಜಿ ವಹಿಸದೆ ಶೋಕೀ ಜೀವನಕ್ಕಾಗಿ ಆಹಾರ ಸೇವಿಸುವ ನಾವು ನಾವು ತಿನ್ನುವ ಆಹಾರದತ್ತ ಗಮನ ಹರಿಸಲೇ ಬೇಕು. ಪತ್ರಕರ್ತ ಮಿತ್ರ ಬಹುಮುಖಿ ಪ್ರತಿಭೆಯ ಧನಂಜಯ ಮುಡಬಿದ್ರೆ ಈ ಕನಸು.ಕಾಂಗಾಗಿ ಆಹಾರ ಪೂರಕ - ಮಾರಕ ವಿಷಯದಲ್ಲಿ ಇನ್ನುಮುಂದೆ ಬರೆಯುತ್ತಾರೆ. ಓದಿ ಅಭಿಪ್ರಾಯಿಸಿ... - ಸಂ.


ನಾವು ಸೇವಿಸುವ ಆಹಾರದಲ್ಲಿ ಏನಿದೆ? ಅವುಗಳಲ್ಲಿ ಆರೋಗ್ಯಕ್ಕೆ ಪೂರಕವಾದುದು ಏನು? ಮಾರಕವಾದುದು ಏನು? ರಾಸಾಯನಿಕ, ಕೀಟನಾಶಕ ಬೆರೆತ ಆಹಾರ ಪದಾರ್ಥಗಳಲ್ಲಿ ಅಪಾಯ ಏನಿದೆ? ತಿಳಿದೇ ಮಾಡುವ ಕಲಬೆರಕೆಯ ಸ್ವರೂಪ ಹೇಗಿದೆ? ಅವನ್ನೆಲ್ಲಾ ತಿಳಿದೇ ಸ್ವೀಕರಿಸುವ ವಿಷವರ್ತುಲದಲ್ಲಿ ನಾವಿದ್ದೇವೆಯೇ? ಆಹಾರ ಪದಾರ್ಥಗಳಲ್ಲಿರುವ ನಿಜ ಸತ್ವ, ಪೋಷಕಾಂಶಗಳ ಪ್ರಯೋಜನವನ್ನು ನಾವು ಪಡೆಯುವುದೆಂತು?ಇದನ್ನೆಲ್ಲಾ ತಿಳಿದುಕೊಳ್ಳುವ ಅವಶ್ಯಕತೆಗಾಗಿ ಆಹಾರ ಪೂರಕ ಮಾರಕ ಲೇಖನ ನೀಡುತ್ತಿದ್ದೇನೆ.
ಪೌಷ್ಠಿಕ ಸತ್ವಯುತ ಆಹಾರ ಸೇವನೆ

ಹಸಿ ತರಕಾರಿ ಹಾಗೂ ಸೊಪ್ಪುಗಳು

ತರಕಾರಿಗಳನ್ನು , ಸೊಪ್ಪುಗಳನ್ನು ಬೇಯಿಸುವುದರಿಂದ ಅವುಗಳಲ್ಲಿ ಅಡಗಿರುವ ಪೋಷಕಾಂಶಗಳು, ಖನಿಜಾಂಶಗಳು ನಾಶವಾಗುತ್ತವೆ. ಆದುದರಿಂದ ಕೆಲವು ತರಕಾರಿಗಳನ್ನಾದರೂ ಬೇಯಿಸದೆ ಹಸಿಯಾಗಿಯೇ ಸೇವಿಸಬೇಕು. ಉದಾ: ಸೌತೆಕಾಯಿ, ಕ್ಯಾರೆಟ್, ಬೀಟ್ ರೂಟ್, ಎಲೆಕೋಸು, ಹೂಕೋಸು ಇವುಗಳನ್ನು ತೊಳೆದು ಸಣ್ಣದಾಗಿ ಹಚ್ಚಿ ತಿನ್ನಬಹುದು. ಅಥವಾ ಕೋಸಂಬರಿ ಮಾಡಿಯಾದರೂ ಸೇವಿಸಬಹುದು. ತರಕಾರಿಗಳಲ್ಲಿ ನಾರಿನಾಂಶ ಇರುವುದರಿಂದ ಜೀರ್ಣಕ್ರಿಯೆ ಬಹಳ ಸುಲಭವಾಗಿ ನಡೆಯುತ್ತದೆ.
(ಮುಂದಿನ ಅಂಕಣದಲ್ಲಿ ಮೊಳಕೆ ಕಾಳುಗಳು)
-ಧನಂಜಯ ಮುಡಬಿದಿರೆ

0 comments:

Post a Comment