ರಾಜ್ಯ - ರಾಷ್ಟ್ರ
ವೇಣೂರು: ಬೆಂಗಳೂರಿನಿಂದ ಬೆಳುವಾಯಿಗೆ ತೆರಳುತ್ತಿದ್ದ ಮಾರುತಿ ಆಮ್ನಿ ಕಾರೊಂದು ವೇಣೂರು ನಿಟ್ಟಡೆ ಸಮೀಪ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಐವರು ತೀವ್ರ ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಐದು ಮಂದಿ ಕಾರಿನಲ್ಲಿ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ರಫೀಕ್, ಜಲೀಲ್, ಫೈರೋಜ್, ಅಶ್ರಫ್ ,ಸಫಿಯಾ ಎಂಬವರು ಗಾಯಗೊಂಡಿದ್ದಾರೆ. ಪುಟ್ಟಮಗುವೊಂದು ಯಾವುದೇ ಗಾಯಗಳಾಗದೆ ಪಾರಾಗಿದೆ.ಘಟನೆ ನಡೆದಾಕ್ಷಣ 108 ಜೀವರಕ್ಷಕ ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಪ್ರಾಣಾಪಾಯದಿಂದ ಪಾರುಮಾಡಿತು.





Subscribe to:
Post Comments (Atom)
Video

0 comments:
Post a Comment