ಈ ಕನಸು

ಇದು ವರ್ಷದ ಕನಸು

ಜನರ ಬಳಿಗೆ ಈ ಕನಸು.ಕಾಂ. ನಿಮ್ಮ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಪರಿಹಾರದ ಪ್ರಯತ್ನ...ನಿರೀಕ್ಷಿಸಿರಿ... ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com
9:54 PM

ಶತರುದ್ರಾಭಿಷೇಕ

Posted by ekanasu

ಪ್ರಾದೇಶಿಕ ಸುದ್ದಿ
ವಿಟ್ಲ ದೇಗುಲದಲ್ಲಿ 108 ಕಾಯಿಗಳ ಗಣಪತಿ ಹೋಮ, ಶತರುದ್ರಾಭಿಷೇಕ

ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿ ವತಿಯಿಂದ ಸೋಮವಾರ ವೇದಮೂರ್ತಿ ಆಲಂಪಾಡಿ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ 108 ಕಾಯಿಗಳ ಗಣಪತಿ ಹೋಮ, ಶತರುದ್ರಾಭಿಷೇಕ ಹಾಗೂ ರಾತ್ರಿ ದುರ್ಗಾ ಪೂಜೆಗಳನ್ನು ನೆರವೇರಿಸಲಾಯಿತು.



ಅರ್ಚಕ ವರ್ಗದಲ್ಲಿ ಎನ್.ಎಸ್.ಬಡೆಕಿಲ್ಲಾಯ, ರಾಧಾಕೃಷ್ಣ ಬಳ್ಳುಕ್ಕುರಾಯ, ಶ್ರೀಕೃಷ್ಣ ಕೇಕುಣ್ಣಾಯ ಪ್ರಮುಖರಾಗಿ ಸಹಕರಿಸಿದರು. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಪವಿತ್ರಪಾಣಿ ನಾರಾಯಣ ಕೇಳತ್ತಾಯ, ಸಮಿತಿ ಅಧ್ಯಕ್ಷ ಎಲ್.ಎನ್.ಕೂಡೂರು, ವಿಟ್ಲ ಅರಮನೆಯ ಕೆ.ಕೃಷ್ಣಯ್ಯ ವಿಟ್ಲ, ಕೊಲ್ಯ ಸೀತಾರಾಮ ಶೆಟ್ಟಿ, ರಾಮದಾಸ ಶೆಣೈ, ನಿತ್ಯಾನಂದ ನಾಯಕ್, ಕಾಶಿಮಠ ಈಶ್ವರ ಭಟ್, ನ್ಯಾಯವಾದಿ ನಟೇಶ ವಿಟ್ಲ, ವಿ.ಶೀನ ಕಾಶಿಮಠ ಮೊದಲಾದವರು ಉಪಸ್ಥಿತರಿದ್ದರು.
ವರದಿ: ಜ್ಯೋತಿಪ್ರಕಾಶ್ ಪುಣಚ

0 comments:

Post a Comment