
ಪಡುಬಿದ್ರಿ ಪರಿಸರದ ನಾಗರೀಕರನ್ನು ನಿರ್ವಸಿತರನ್ನಾಗಿ ಮಾಡುವ ಕಲ್ಲಿದ್ದಲಾಧಾರಿತ 1200ಮೆ.ವಾ ಯು.ಪಿ.ಸಿ.ಎಲ್(ನಾಗಾರ್ಜುನ) ಉಷ್ಣ ವಿದ್ಯುತ್ ಸ್ಥಾವರ ಯೋಜನೆ ಇಂದು ಪ್ರಾರಂಬಿಕ ಹಂತದ ಚಾಲನೆಯಲ್ಲಿ ತೊಡಗಿದೆ. ಸ್ಥಾವರದ ಹೊಗೆ ಕೊಳವೆಯಲ್ಲಿ ಕಪ್ಪು ಧೂಮವು ಬಹಳ ದೂರದವರೆಗೆ ಕಂಡುಬರುತ್ತಿತ್ತು. ನಿಗದಿತ ಸಮಯದಲ್ಲಿ ರೈಲ್ವೇ ಹಳಗಳನ್ನು ಹಾಕಲು ಸಾಧ್ಯವಾಗದ ನಿಟ್ಟಿನಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪರವಾನಿಗೆ ರಹಿತವಾಗಿ ಕಲ್ಲಿದ್ದಲು ಸಾಗಿಸುವಲ್ಲಿ ಸಂಸ್ಥೆಯ ಯಶಸ್ವಿಯಾಗಿದ್ದು ಪ್ರಯೋಗಾತ್ಮಕವಾಗಿ ಯೋಜನೆ ಕಾರ್ಯಾರಂಭ ಮಾಡಿದೆ.
ಚಿತ್ರ:ಭಾಗ್ಯವಾನ್ ಮುಲ್ಕಿ.
Subscribe to:
Post Comments (Atom)
Video

0 comments:
Post a Comment