ಕಾರಿಡಾರ್
ಜೋಗ ಜಲಪಾತದ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಯೋಜನೆ ಕೈಗೊಂಡ ಘಟನೆ ನಿಮಗೆಲ್ಲರಿಗೂ ಗೊತ್ತೇ ಇದೆ. ವಿಪರ್ಯಾಸದ ಸಂಗತಿಯೆಂದರೆ ಯೋಜನೆಯ ಉದ್ದೇಶವೇ ಈಡೇರಿದಂತೆ ಕಂಡುಬಂದಿಲ್ಲ. "ದೀಪದ ಬುಡ ಕತ್ತಲು" ಎಂಬಂತೆ ಜೋಗ ಜಲಪಾತದ ಸಮೀಪದ ಹಲವು ಹಳ್ಳಿಗಳು ಇಂದಿಗೂ "ಕತ್ತಲೆ"ಯಲ್ಲೇ ಮುಳುಗಿದೆ...!
ಜೋಗದ ಅದ್ಭುತ ವೈಭವದ ಸೆರಗಿನಲ್ಲಿ "ಮೃತ್ಯು"ವೂ ಅಡಗಿ ಕುಳಿತಿದೆ. ಅನೇಕ ಪ್ರವಾಸಿಗರು ಜಲಪಾತದ ಸವಿ ಸವಿದು "ಮೈಮರೆತ" ಸಂದರ್ಭಗಳಲ್ಲಿ ಜೋಗದ "ಗುಂಡಿ" ಸೇರಿದ್ದಾರೆ.
ಜೋಗ ಜಲಪಾತ ಭಾರತದ ನಕ್ಷೆಯಲ್ಲಿ ಒಂದು ವಿಶಿಷ್ಠ ಸ್ಥಾನ ಪಡೆದಿದೆಯಾದರೂ ಅದು ಮಳೆಗಾಲದಲ್ಲಿ ಮಾತ್ರ "ರಮ್ಯಾದ್ಭುತ "ವಾಗಿ ಗೋಚರಿಸುವಂತಾಗುತ್ತಿದೆ.
ಲಿಂಗನ ಮಕ್ಕಿ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಹಲವು ಮನಕಲುಕುವ ಸಂಗತಿಗಳು ನಡೆದುಹೋಗಿವೆ. ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ತಮ್ಮ "ದ್ವೀಪ" ಚಿತ್ರದಲ್ಲಿ ಈ ಘಟನಾವಳಿಗಳನ್ನು ಸವಿಸ್ತಾರವಾಗಿ ಚಿತ್ರಿಸಿದ್ದಾರೆ. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಪ್ರಾಪ್ತವಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತ ವಿಶ್ವ ವಿಖ್ಯಾತ. ತೀರ್ಥಹಳ್ಳಿ ಸನಿಹದ ಅಂಭುತೀರ್ಥ ಎಂಬಲ್ಲಿ ಜನಿಸುವ ಶರಾವತೀ ನದೀ ಸಾಗರ ಸೇರುವ ಹಾದಿಯ ಮಧ್ಯೆ ಈ ಸೊಗಸಾದ ಜಲಪಾತವನ್ನು ಸೃಷ್ಠಿಸಿದ್ದು ಅಷ್ಟೇ ಅದ್ಭುತ. 900 ಅಡಿ ಆಳಕ್ಕೆ ಭೋರ್ಗರೆಯುತ್ತಾ ನದೀ ನಾಲ್ಕು ಕವಲಾಗಿ ಧುಮ್ಮಿಕ್ಕಿ ರಮ್ಯ ನೋಟವನ್ನು ಸೃಷ್ಠಿಸಿದ ಪರಿ ಅತ್ಯದ್ಭುತ.
ಆದರೆ ಇಂದು ಯತೇಚ್ಛ ಮಳಯಾದರೆ ಮಾತ್ರ ಜೋಗದ ಅದ್ಭುತ ಜಲಧಾರೆಯ ರುದ್ರ ನರ್ತನ ವೀಕ್ಷಿಸಲು ಸಾಧ್ಯ ಎಂಬ ಸ್ಥಿತಿ ನಿರ್ಮಾಣಗೊಂಡಿದೆ.
ಜೋಗ ಪ್ರವಾಸಿಗರ ಪಾಲಿಗೆ ಸ್ವರ್ಗ ಹೌದು...ಅದು ಜೋರಾಗಿ ಮಳೆಯಿದ್ದರೆ ಮಾತ್ರ!!!.
ಮಾನಸ ಎಂ.ಎನ್.
ಪ್ರಥಮ ಪತ್ರಿಕೋದ್ಯಮ
ಆಳ್ವಾಸ್ ಕಾಲೇಜು, ಮೂಡಬಿದಿರೆ.
Subscribe to:
Post Comments (Atom)
Video

0 comments:
Post a Comment