ಆಟ - ಅವಲೋಕನ
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕರ್ನಾಟಕ ಇದರ ಹನ್ನೆರಡನೇ ವರ್ಷದ ಅಂತರಕಾಲೇಜು ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ರೀಡಾ ಸ್ಪರ್ಧೇ "ಸ್ವರೂಪ" ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆರಂಭಗೊಂಡಿದೆ. ಕ್ರೀಡಾ ಸ್ಪರ್ಧೆಗಳು ಮೂಡಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಮಂಗಳವಾರ ಉದ್ಘಾಟನೆಗೊಂಡಿತು. ರಾಜೀವಗಾಂಧಿ ವಿ.ವಿ.ಯ 90ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.ಕ್ರೀಡಾಕೂಟದ ಆರಂಭದಲ್ಲಿ ನಡೆದ ಮೆರವಣಿಗೆಯಲ್ಲಿ ಕುಂದಾಪುರದ ಕೊರಗರ ಡೋಲು ತಂಡ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು.ಶಿವಮೊಗ್ಗದ ಬುದ್ದಿಯಪ್ಪ ತಂಡದವರ ಡೊಳ್ಳು ಕುಣಿತ ಮೆರುಗು ಹೆಚ್ಚಿಸಿತು. ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಕ್ಯಾ.ಗಣೇಶ್ ಕಾರ್ಣಿಕ್, ಸೇರಿದಂತೆ ಇತರ ಗಣ್ಯರು ಈ ಸಂದರ್ಭದಲ್ಲಿದ್ದರು.




Subscribe to:
Post Comments (Atom)
Video

0 comments:
Post a Comment