ಅಗ್ರಲೇಖನ
"ನೋಡಿ ನೀನ್ ಮಾಡುವುದು ಸರಿಯಲ್ಲ ಎಂದು ಬೊಟ್ಟು ಮಾಡಿ ತೋರುವ ಮೊದಲು ನಾವೆಷ್ಟರ ಮಟ್ಟಿಗೆ ಸರಿಯಿದ್ದೇವೆ " ಎಂದು ಅವಲೋಕಿಸುವ ಸುಸಂದರ್ಭ ಇದು. ಇದು ಮಾಧ್ಯಮ ಮಂದಿಯನ್ನೂ ಬಿಟ್ಟಿಲ್ಲ ಎಂದರೆ ತಪ್ಪಾಗಲಾರದು. ರಾಜಕಾರಣಿಗಳನ್ನು , ಅವರ ಅವ್ಯವಹಾರಗಳನ್ನು ಬಟಾ ಬಯಲುಗೊಳಿಸುತ್ತೇವೆ ಎಂಬಂತೆ ಫೋಸ್ ನೀಡುವ ಗೌರವಾನ್ವಿತ ಮಾಧ್ಯಮ ಮಿತ್ರರೂ ತಾನೂ ಇದರಿಂದ ಹೊರತಾಗಿಲ್ಲ ಎಂಬುದನ್ನು ಅರ್ಥೈಸಿಕೊಳ್ಳುವುದು ಒಳಿತು.
ಸಣ್ಣ ಒಂದೇ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪರ ಮೇಲಿನ ವಿಪಕ್ಷಗಳ ಆರೋಪ, ಭೂ ಹಗರಣ , ನಿವೇಶನ ಹಂಚಿಕೆ ಕುರಿತಂತೆ ಇಂದಿನ ವಿದ್ಯುನ್ಮಾನ ಮಾಧ್ಯಮಗಳೂ ಸೇರಿದಂತೆ ಕೆಲವೊಂದು ಮುದ್ರಣಮಾಧ್ಯಮಗಳು ತಾವೇನೋ ಸಂಪೂರ್ಣ ಸಾಚಾಗಳು , ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಬಹುದೊಡ್ಡ ಹಗಣರಣವನ್ನೇ ಮಾಡಿದ್ದಾರೆ ಎಂಬಂತೆ ವರದಿ ಮಾಡಿವೆ. ಪ್ಯಾನಲ್ ಡಿಸ್ಕರ್ಶನ್ ನಡೆಸಿವೆ.ಒಳ್ಳೆಯದೇ.
ಯಾರೇ ಆಗಿರಲಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಇರುವಂತಹವರು ಅವ್ಯವಹಾರ ನಡೆಸಿದ್ದೇ ಆದಲ್ಲಿ ಅದನ್ನು ಜನತೆಯೆದುರು ತಿಳಿಸುವುದು ಮಾಧ್ಯಮದ ಕರ್ತವ್ಯ. ಆದರೆ ಇಂದು ಅದೇ ವಿಚಾರವನ್ನು ವರದಿ ಮಾಡಿದ ಮಾಧ್ಯಮದ ಪ್ರಮುಖರು ತಾವು ಇತರ ರಾಜಕೀಯ ಪಕ್ಷಗಳು ಆಡಳಿತದಲ್ಲಿದ್ದ ಸಂದರ್ಭದಲ್ಲಿ ಇದೇ ಬಿ.ಡಿ.ಎ. ನಿವೇಶನಗಳನ್ನು ಪಡಕೊಂಡಿದ್ದೇವೆ ಎಂಬುದನ್ನು ಮರೆತಿರುವುದು ವಿಷಾಧನೀಯ. ಈ ವಿಚಾರವನ್ನು ತೆಹಲ್ಕಾ ಬಯಲು ಮಾಡಿದ್ದು ; ತೆಹಲ್ಕಾದ ಈ ಕಾರ್ಯಾಚರಣೆ ಮೆಚ್ಚತಕ್ಕಂತಹುದಾಗಿದೆ.
ಎಸ್.ಎಂ.ಕೃಷ್ಣ, ಧರಂಸಿಂಗ್, ಕುಮಾರ ಸ್ವಾಮಿ ಮುಖ್ಯಮಂತ್ರಿಗಳಾಗಿ ಇದೇ ಕರ್ನಾಟಕವನ್ನು ಆಡಳಿತ ಮಾಡುತ್ತಿದ್ದ ಸಂದರ್ಭದಲ್ಲಿ ತಮ್ಮ ರಕ್ತ ಸಂಬಂಧಿಗಳಿಗೆ, ಮಿತ್ರರಿಗೆ, ಆತ್ಮೀಯರಿಗೆ, ವಿಶ್ವಾಸಿಗಳಿಗೆ, ಹೆಚ್ಚೇಕೆ ತಮ್ಮ ಪರವಾಗಿದ್ದ ಪತ್ರಕರ್ತರಿಗೆ ಕೋಟ್ಯಾಂತರ ಬೆಲೆಯ ಭೂಮಿಯನ್ನು ಹಂಚಿದ್ದಾರೆ ಎಂಬಂಶವನ್ನು ತೆಹಲ್ಕಾ ಬಹಿರಂಗಗೊಳಿಸಿದೆ. ಆದರೆ ಈ ಬಗ್ಗೆ ಇಷ್ಟರ ತನಕ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದ, ಪ್ಯಾನಲ್ ಡಿಸ್ಕರ್ಷನ್ ಮಾಡುತ್ತಿದ್ದ ಮಹಾನ್ ಪತ್ರಕರ್ತರು, ಸಂಪಾದಕ ಮಿತ್ರರು ಚಕಾರವೆತ್ತದೆ ಮುಗುಂ ಆಗಿರುವುದು ಮಾತ್ರ ವಿಷಾಧನೀಯ.
ಇಷ್ಟೇ ಅಲ್ಲ... ದಿನ ದಿನವೂ ಬಿ.ಎಸ್.ಯಡಿಯೂರಪ್ಪರ ವಿರುದ್ಧ ಕಿಡಿಕಾರುವ, ಒಂದಿಲ್ಲೊಂದು ಪ್ರಕರಣಗಳನ್ನು ಸೃಷ್ಠಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡುವ ಮಾಜಿ ಮುಖ್ಯಮಂತ್ರಿ ಜೆ.ಡಿ.ಎಸ್. ನಾಯಕ ಘನಮಾನ್ಯ ಕುಮಾರಸ್ವಾಮಿಯವರು ತಮ್ಮ ಅಧಿಕಾರಾವಧಿಯಲ್ಲಿ 346.33 ಎಕ್ಕರೆಗೂ ಮಿಕ್ಕಿದ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿ ಕೈತೊಳೆದು ಕೂತಿದ್ದಾರೆ. ಧರಂಸಿಂಗ್ ತಮ್ಮ ಅವಧಿಯಲ್ಲಿ 110.33, ಎಸ್.ಎಂ.ಕೆ 633.33 ಎಕರೆ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದ್ದಾರೆ. ಇದೆಲ್ಲವೂ ಕೇವಲ ತಮ್ಮ ಸಂಬಂಧಿಗಳಿಗಷ್ಟೇ ವಿತರಿಸಿದ್ದಲ್ಲ. ಇಲ್ಲೂ ಮಾಧ್ಯಮ ಮಿತ್ರರಿಗೆ ಪಾಲುಹೋಗಿದೆ.
ಇರಲಿ ಬಿಡಿ. ಸರಕಾರಿ ಭೂಮಿಯನ್ನು ಕೊಟ್ಟಿದ್ದಾರೆ ಎಂದೆ ಸುಮ್ಮನಿರೋಣ.ಅದು ತಪ್ಪು. ಆದರೆ... ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಷ್ಟೇ ಪ್ರಮುಖ ಸ್ಥಾನದಲ್ಲಿರುವ ಪತ್ರಿಕಾ ರಂಗ ಅಥವಾ ಮಾಧ್ಯಮ ರಂಗ ಕೇವಲ ಹಗರಣಗಳನ್ನು ಸೃಷ್ಠಿಸುವ ಸಲುವಾಗಿ ಕೋಟಿ ಕೋಟಿ ಹಣವನ್ನು ವಿವಿಧ ರಾಜಕೀಯ ಪಕ್ಷಗಳಿಂದ ವಿವಿಧ ರೀತಿಯಲ್ಲಿ ಪಡೆಯುತ್ತಿದೆ . ಇದಕ್ಕಿಂತ ಬೇಸರ ಇನ್ನೊಂದಿಲ್ಲ. ಕರ್ನಾಟಕ ರಾಜ್ಯದ ಆಡಳಿತ ಪಕ್ಷ ಬಿ.ಜೆ.ಪಿಯ ವಿರುದ್ಧ ಭೂ ಹಗರಣದಂತಹ ಹಗರಣ ಸೃಷ್ಠಿಸಿ ಮುಖ್ಯಮಂತ್ರಿಗಳ ಮುಖಕ್ಕೆ ಕಪ್ಪು ಮಸಿ ಬಳಿಯಬೇಕು, ಆಡಳಿತದಲ್ಲಿರುವ ಬಿಜೆಪಿಯನ್ನು ಕೆಳಗಿಳಿಸಬೇಕೆಂದು ವಿಪಕ್ಷವೊಂದು ಕನ್ನಡದ 24x7 ಸುದ್ದಿವಾಹಿನಿಗೆ 2ಕೋಟಿ ಗುಟ್ಟಾಗಿ ನೀಡಿದ್ದ ಒಂದಾದರೆ, ಇನ್ನೊಂದು ಸುದ್ದಿವಾಹಿನಿಯ ವರದಿಗಾರರಿಗೆ ಕಾರೊಂದನ್ನು ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರೋರ್ವರು ಕೊಡುಗೆಯಾಗಿ ನೀಡಿ ಬೆನ್ನುಸವರಿದ್ದಾರೆ.
ಮತ್ತೊಂದು ಸುದ್ದಿವಾಹಿನಿಯ ಒಡೆತನವನ್ನೇ ಹೊಂದಿದ ಈ ಪ್ರಮುಖರು ಏನೇ ಆಗಲಿ ಬಿಜೆಪಿ ವಿರುದ್ಧ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ವಿರುದ್ಧ ನಿರಂತರ ನೀವು ನಿಮ್ಮ ವಾಹಿನಿಯಲ್ಲಿ ಹೇಳುತ್ತಿರಬೇಕೆಂದು ಒಂದಷ್ಟು ಹಣದ ಆಮಿಷತೋರಿ ಆ ವಾಹಿನಿಯನ್ನು ದುರುಪಯೋಗಪಡಿಸಿದ್ದು ಇದೀಗ ಬಟಾಬಯಲಾಗಿದೆ.
ಮಾಧ್ಯಮ ಎಂಬುದು ಒಂದು ಅಸ್ತ್ರವಲ್ಲ. ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆಂದು ಗೂಂಡಾಗಿರಿ ನಡೆಸುವ, ಏಕವಚನದಲ್ಲಿ ಸಮಾಜದ ಎದುರಿಗೆ ಗಣ್ಯಾತಿಗಣ್ಯ ವ್ಯಕ್ತಿಗಳ ಮಾನ ಹರಾಜು ಮಾಡುವ , ತಾನೇನೋ ಮಹಾನ್ ಸಾಧನೆ ಮಾಡಿದ್ದೇನೆ ಎಂಬಂತೆ ಫೋಸ್ ಕೊಡುವ, ಅನೇಕ ಮಂದಿ ಪತ್ರಕರ್ತರು, ಮಾಧ್ಯಮದ ಪ್ರಮುಖ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವ ಜವಾಬ್ದಾರಿಯುತ ವ್ಯಕ್ತಿಗಳು ನಮ್ಮ ನಡುವೆಯೇ ಇದ್ದಾರೆ. ಆದರೆ ಮಾಧ್ಯಮ ಎಂಬುದು ಅಷ್ಟೇ ಸೂಕ್ಷ್ಮ ಹಾಗೂ ಜವಾಬ್ದಾರಿಯುತ ಕ್ಷೇತ್ರ ಎಂಬುದನ್ನು ಇವರೆಲ್ಲರೂ ಮರೆತಂತಿದ್ದಾರೆ . ಇದು ಮಾತ್ರ ಶೋಚನೀಯ ಅಷ್ಟೇ ಅಮಾನವೀಯ.
ಮಾಧ್ಯಮ ಎಂಬುದು ಕೇವಲ ಹಣಮಾಡುವ "ಉದ್ಯಮ" ಆಗಬಾರದು. ಅದು ಸಂವಿಧಾನದ ನಾಲ್ಕನೇ ಅಂಗ. ಸಮಾಜದ ಓರೆ ಕೋರೆಗಳನ್ನು ತಿದ್ದುವ, ಸಮಾಜಕ್ಕೆ ಸ್ಪಷ್ಟ ಮಾರ್ಗದರ್ಶನ ನೀಡುವ, ತಪ್ಪನ್ನು ತಿದ್ದಿ ಸರಿಪಡಿಸಿ , ಸುಖೀ ಸಮಾಜದ ನಿರ್ಮಾಣಕ್ಕೆ ಬೇಕಾದ ಮಾರ್ಗದರ್ಶನ ನೀಡುವ ಒಂದು ಮಹತ್ಕಾರ್ಯ ಮಾಧ್ಯಮರಂಗದಿಂದ ಆಗಬೇಕಾಗಿದೆ. ಮಾಧ್ಯಮ ಮಂದಿ "ನಾವು ನಡೆದದ್ದೇ ದಾರಿ, ಮಾಡಿದ್ದೇ ಕಾರ್ಯ" ಎಂಬ ಧೋರಣೆಯನ್ನು ಬಿಡಬೇಕಾಗಿದೆ. ನಿಜವಾದ ಮಾಧ್ಯಮ ನೀತಿಯನ್ನು , ಧೋರಣೆಯನ್ನು ಸಮಾಜಕ್ಕೆ ತಿಳಿಸುವ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜಕ್ಕೆ ಸನ್ಮಾರ್ಗ ತೋರುವ ಕಾರ್ಯ ಮಾಡಬೇಕು. ಅದು ಬಿಟ್ಟು ಅವರಿವರೊಡ್ಡುವ ಆಮಿಷಗಳಿಗೆ ಬಲಿಯಾಗಿ, ಸ್ವಾರ್ಥ ರಾಜಕೀಯಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾ ; ತಪ್ಪನ್ನೂ ಸರಿಯೆಂಬಂತೆ ಅಮಾಯಕ ಜನತೆಗೆ ತೋರುವ ಕಾರ್ಯ ಮಾಡಬಾರದು.
ಹರೀಶ್ ಕೆ. ಆದೂರು
Subscribe to:
Post Comments (Atom)
Video

6 comments:
tumba channagide nijavaglu ednna ellaru arta madi kolabeku uttamavad lekhana
superb sir... good works.... hats off to tehelka in this matter..
vineeth pataje
ಸಕಾಲಿಕ ಬರಹ. ಮಾಧ್ಯಮಗಳು ಹೇಳುವುದೆಲ್ಲ ಸತ್ಯವಲ್ಲ ಎಂದು ಹಲವು ಬಾರಿ ಆಧಾರ ಸಹಿತವಾಗಿ ನಿರೂಪಿತವಾಗಿದ್ದರೂ ನಾವಿನ್ನೂ ಮಾಧ್ಯಮಗಳ ಮಾತನ್ನು ಸಾರಾಸಗಾಟಾಗಿ ನಂಬುತ್ತೇವೆಲ್ಲ ಇದಕ್ಕಿಂತ ದೌರ್ಭಾಗ್ಯ ಬೇರಿಲ್ಲ...
"ಸಕಾಲಿಕ ಬರಹ. ಮಾಧ್ಯಮಗಳು ಹೇಳುವುದೆಲ್ಲ ಸತ್ಯವಲ್ಲ ಎಂದು ಹಲವು ಬಾರಿ ಆಧಾರ ಸಹಿತವಾಗಿ ನಿರೂಪಿತವಾಗಿದ್ದರೂ ನಾವಿನ್ನೂ ಮಾಧ್ಯಮಗಳ ಮಾತನ್ನು ಸಾರಾಸಗಾಟಾಗಿ ನಂಬುತ್ತೇವೆಲ್ಲ ಇದಕ್ಕಿಂತ ದೌರ್ಭಾಗ್ಯ ಬೇರಿಲ್ಲ..." - ಜಗದೀಶ ಶರ್ಮ
media personnel are required to be trained in reporting, presenting, interviewing etc.....
they are misguiding, misleading the society......they are harming the society more than the politicians, by making use of the media for selfish vested interests... where is the law to punish such medias..
It is pain to watch news now a days..all biased...if denotification by current goverment is wrong, then same should apply to latters..we should introspect for some other alternative method which can be parallel to these news salesmen's channels...praveenshankat@gmail.com, Kuwait
Post a Comment