ಪ್ರಾದೇಶಿಕ ಸುದ್ದಿ
ಮೂಡುಬಿದಿರೆ : ಆಳ್ವಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿ ಶಿರಸಿಯ ಸಂದೀಪ್ ಪಿ. ಹೆಗಡೆ ಇವರು ರಚಿಸಿದ 'ಸತ್ಯಗ್ರಹಣ' ಎಂಬ ಕಾದಂಬರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ 2010ರ ಯುವ ಬರಹಗಾರ ಪ್ರೋತ್ಸಾಹಕ ಅನುದಾನ ಲಭಿಸಿದೆ.ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಶೈಕ್ಷಣಿಕ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ಸಂದೀಪ್ ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಚಿಪಗಿ ಗ್ರಾಮದವರು. ಪರಮೇಶ್ವರ ಹೆಗಡೆ ಮತ್ತು ಶಾರದ ಹೆಗಡೆಯವರ ಮಗ.ಹಿಂದೂಸ್ಥಾನಿ ಸಂಗೀತದ ಸೀನಿಯರ್ ವಿಭಾಗದಲ್ಲಿ ಅಭ್ಯಾಸ ನಡೆಸುತ್ತಿರುವ ಇವರು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆಳ್ವಾಸ್ ನ ಪ್ರತಿಭಾನ್ವಿತರ ದತ್ತು ಸ್ವೀಕಾರ ಯೋಜನೆಯಡಿ ವ್ಯಾಸಂಗ ನಡೆಸುತ್ತಿರುವ ಸಂದೀಪ್ ಬರೆದ ಮೊದಲ ಕೃತಿಗೆ ಈ ಅನುದಾನ ಲಭಿಸಿದೆ. ಅನುದಾನವು 10,000 ನಗದು ಮತ್ತು ಸಂಮಾನವನ್ನು ಒಳಗೊಂಡಿದೆ. ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅನುದಾನವನ್ನು ನೀಡಲಾಗುವುದು. ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸಂದೀಪ್ ಹೆಗಡೆ ಸಾಧನೆಯನ್ನು ಅಭಿನಂದಿಸಿದ್ದಾರೆ.
ವರದಿ: ಧನಂಜಯ ಕುಂಬ್ಳೆ.
Subscribe to:
Post Comments (Atom)
Video

0 comments:
Post a Comment