ರಾಜ್ಯ - ರಾಷ್ಟ್ರ
ಮೂಡಬಿದಿರೆ: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭಗೊಂಡಿದೆ. ಮೇ.31ರಂದು ಅಬ್ಬರದ ಸಿಡಿಲು,ಗಾಳಿಯೊಂದಿಗೆ ಭರ್ಜರಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಹು ಭಾಗಗಳಲ್ಲಿ ಮಳೆ ಸುರಿದಿದೆ. ತನ್ಮೂಲಕ ಮುಂಗಾರು ಮಳೆಯ ಒಡ್ಡೋಲಗವಾಗಿದೆ. ಈ ಬಾರಿ ಅತ್ಯಂತ ಸಮರ್ಪಕವಾಗಿಯೇ ಮುಂಗಾರು ಪ್ರವೇಶಗೊಂಡಿದೆ ಎಂದರೆ ತಪ್ಪಾಗಲಾರದು. ಜೂನ್ 1ರಂದು ಮಳೆಗಾಲ ಆರಂಭ ಎಂಬಂತೆ ಈ ಹಿಂದೆ ಇತ್ತು.ಆದರೆ ಬರ ಬರುತ್ತಾ ಹವಾಮಾನದ ವೈಪರೀತ್ಯ, ಪ್ರಕೃತಿಯಲ್ಲಿನ ಬದಲಾವಣೆಯಿಂದ ಮುಂಗಾರು ನಿಗಧಿತ ಸಮಯಕ್ಕೆ ಪ್ರಾರಂಭಗೊಳ್ಳುತ್ತಿರಲಿಲ್ಲ.ಇದೀಗ ಮೇ ಅಂತ್ಯದಲ್ಲೇ ಮಳೆಯ ಆರಂಭವಾಗಿದೆ.
Subscribe to:
Post Comments (Atom)
Video

0 comments:
Post a Comment