ಈ ಕನಸು ಅವಾರ್ಡ್
ನನ್ನ ಬದುಕಲ್ಲಿ ಬಂದೆ
ನೀ ಮಂದ ಮಾರುತದಂತೆ,
ಮನ ಪ್ರವೇಶಿಸುವಾಗ ನಿನಗಿರಲಿಲ್ಲ
ಜಗದ ಅಳಕು...
ಪ್ರೀತಿ ಮಾಡುವಾಗ ಯಾರಲ್ಲೂ
ಕೇಳದವ ಬದುಕು ಅನ್ನುವ
ಮೂರುರಕ್ಷರ ಬಂದಾಗ
ಆಕೆಯ ಚರಿತ್ರೆಯೇನು ಎಂದು ಕೇಳುತ್ತಿರುವೆಯಲ್ಲಾ...
ಇನ್ನೂ ಏನೂ ಬರೆಯದ ಸ್ವಚ್ಚ
ಸುಂದರ ಹಾಳೆ ನನ್ನ ಮನಸ್ಸು
ಗೀಚಬೇಡವೋ
ನಿನ್ನ ಮನದಾಸೆಗಳನ್ನ
ಶುಭ್ರ ಹಾಳೆ ಕೊಳಕಾಗುವುದು,
ನೈಜತೆಯಲ್ಲಿಯೇ
ಅರಳಿದ ಈ ಹೂವಿಗೆ
ನಿನ್ನ ಕಪಟ ಪ್ರೀತಿಯ
ಅರಿವಾಗಲೇ ಇಲ್ಲ
ನಿಜವೆಂದೆ ನಂಬಿತು,
ಬಾಡಿಹೋದ ಹೂವು
ಮತ್ತೆ ಅರಳದು.
ನೀನು ತಿಳಿದಂತೆ
ಜನರಾಡೋ
ಹರಟೆಯ ಕಟ್ಟೆಯಂತೂ
ಅಲ್ಲ ನನ್ನ ಮನಸ್ಸು.....
ಏನೂ ತಪ್ಪು ಮಾಡದ ಮುಗ್ಧ
ಮನಸ್ಸಿಗೆ ಹೇಳದೇ-ಕೇಳದೇ
ಎದ್ದು ಹೋದೆಯಲ್ಲಾ
ಕಾರಣವೇನು..... ?
-ಮಲ್ಲಿಕಾಭಟ್ ಪರಪ್ಪಾಡಿ
Subscribe to:
Post Comments (Atom)
Video

0 comments:
Post a Comment