ಈ ಕನಸು

ಇದು ವರ್ಷದ ಕನಸು

ಜನರ ಬಳಿಗೆ ಈ ಕನಸು.ಕಾಂ. ನಿಮ್ಮ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಪರಿಹಾರದ ಪ್ರಯತ್ನ...ನಿರೀಕ್ಷಿಸಿರಿ... ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ಪ್ರಾದೇಶಿಕ ಸುದ್ದಿ

ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಶೋಭಾವನದಲ್ಲಿ ಮಲೇಶಿಯನ್ ತಳಿ ಸಿಹಿಹುಣಸೆ ಹಣ್ಣಿನ ಗಿಡವನ್ನು ಡಾ.ಎಂ.ಮೋಹನ ಆಳ್ವರಿಗೆ ನೀಡುವುದರ ಮೂಲಕ ಕೈಕಂಬದ ಸ್ಖಂಧಶ್ರೀ ಸೇವಾ ಸಮಿತಿ ವಿಶಿಷ್ಟ ರೀತಿಯಲ್ಲಿ ವನಮಹೋತ್ಸವವನ್ನು ಆಚರಿಸಿತು.ಬಹರೈನ್ನಲ್ಲಿ ಉದ್ಯೋಗದಲ್ಲಿರುವ ಕಂದಾವರ ಮೋಹನ ಸಾಲ್ಯಾನ್ ಅವರು ಬೆಳೆಸಿದ ಗಿಡವನ್ನು ಸಸ್ಯ ಅಧ್ಯಯನ ಮಾಡುವವರಿಗೆ ಸದುಪಯೋಗವಾಗಲೆಂದು ಶೋಭಾವನಕ್ಕೆ ಸಮರ್ಪಿಸಿದ್ದೇವೆ ಎಂದು ಸ್ಕಂಧಶ್ರೀ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದರು. ಗಿಡವನ್ನು ಸ್ವೀಕರಿಸಿ ಮಾತನಾಡಿದ ಡಾ.ಎಂ.ಮೋಹನ ಆಳ್ವರು ಸೇವಾ ಸಂಸ್ಥೆಗಳು ಪ್ರಕೃತಿ ಪ್ರೀತಿಯ, ಸೇವಾ ಮನೋಭಾವದಿಂದ ಕಾರ್ಯವೆಸಗಬೇಕು. ಸ್ಕಂದಶ್ರೀಯ ಕಾರ್ಯಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದರು. ಈ ಸಂದರ್ಭದಲ್ಲಿ ಸ್ಕಂಧಶ್ರೀಯ ಅಧ್ಯಕ್ಷ ನವೀನ್ ಕೈಕಂಬ, ಪ್ರಕಾಶ್ ಕೈಕಂಬ, ಕಂದಾವರ ಮೋಹನ್ ಸಾಲ್ಯಾನ್, ಶೇಖರ್ ಶೆಟ್ಟಿಗಾರ್, ಭರತ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

0 comments:

Post a Comment