ಸಾಹಿತ್ಯ
ಬಿಕ್ಕುತ್ತಿದೆ ಹೃದಯ
ಅರಿಯದೇ ಅವಸರದಲ್ಲಿ ಆಡಿದ ಮಾತಿಗೆ
ಕೈಜಾರಿ ಹೋದ ಕ್ಷಣಗಳಿಗೆ
ಹೇಳಿದ ಮಾತಿನ ಭಾವ ಒಂದೇ ಆದರೂ
ಕೇಳಿದ ಕಿವಿಗೆ ಅದರ ಅರ್ಥ ಹಲವಾರು-
ಧ್ವನಿಸಿದ್ದೇ ಈ ಅಪಾರ್ಥಗಳಿಗೆ ಮುನ್ನುಡಿ
ಹೇಳಿದ್ದೊಂದೇ ಮಾತಾದರೂ ಹೇಳಲಾಗದೆ
ಹೋದವೆಷ್ಟೋ!
ಮಧ್ಯೆ ನುಗ್ಗಿ ಸುಂದರ ಕೊಳಕ್ಕೆ
ಕಲ್ಲು ಹಾಕಿದವೆಷ್ಟೋ
ಈ ಮಾತನಾಡಿದವರಿಗೂ ಮುಗಿಯದ ಬೇಜಾರು
ಕೇಳಿದವರಿಗೂ
ಧಿಕ್ಕಾರವಿರಲಿ ನನ್ನ ಬಾಯಿಂದ ಜಾರಿದ ಆ
ಬಿರು ನುಡಿಗಳಿಗೆ.ಕ್ಷಮೆಯಿರಲಿ...
- ಸೌಮ್ಯ ಸಾಗರ.
Subscribe to:
Post Comments (Atom)
Video

0 comments:
Post a Comment