8:58 PM
Posted by
ekanasu
ಈ ಕನಸು ಅವಾರ್ಡ್
ಬದುಕೆಂಬ ಯಾನದಲ್ಲಿ
ನಾ ಆದೇ ಮೌನಿ...
ಕಷ್ಟಗಳ ಸುತ್ತೋಲೆಯಲ್ಲಿ
ನರಳಿ ನಲುಗಲಿಲ್ಲ
ಅಲ್ಲಿರುವ ತತ್ವಗಳ
ಅರಿತು ಮೌನಿಯಾದೇ..
ಮಾತು ಮರೆಯಲ್ಲಿ
ಆದರೆ ಮಾತನಾಡುವುದನ್ನೇ
ನಿಲ್ಲಿಸಿ ಮೌನಿಯಾದೆ...
ಮೌನದೊಳಗಿರುವ ಅಗಾಧ
ನೋವುಗಳೊಳಗೆ ನಲಿದಾಡಿದೆ
ಆ ಭಾವಗಳೆ ಇಂದು
ಕವನವಾಗಿ ನಾ
ಲೇಖನಿಯ ಜೊತೆಗಾರಳಾದೆ...
ನಾ ಮನಸಾರೆ ಮೌನಿಯಾದೆ..
-ಮಲ್ಲಿಕಾಭಟ್ ಪರಪ್ಪಾಡಿ
0 comments:
Post a Comment