ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂ...ಇದೀಗ 5ನೇ ವರುಷಕ್ಕೆ ಪಾದಾರ್ಪಣೆ...ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ... ಬಳಿಗೆ ಈ ಕನಸು.ಕಾಂ. ನಿಮ್ಮ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಪರಿಹಾರದ ಪ್ರಯತ್ನ...ನಿರೀಕ್ಷಿಸಿರಿ... ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ರಾಜ್ಯ - ರಾಷ್ಟ್ರ


ಮೂಡಬಿದಿರೆ : ಕಾಲೇಜು ವಾರ್ಷಿಕ ಸಂಚಿಕೆಗಳೆಂದರೆ ಜಾಳು ಜಾಳಾಗಿರುವುದಲ್ಲ.ಬದಲಾಗಿ ಮಾಹಿತಿಯುಕ್ತ ಗ್ರಂಥವಾಗಿರಬೇಕು. ಅದಕ್ಕೆ ಈ "ಸ್ವರೂಪ" ಒಂದು ಸಾಕ್ಷಿ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲಬುರ್ಗಿ ಹೇಳಿದ್ದಾರೆ.
ಡಾ.ಎಂ.ಎಂ.ಕಲಬುರ್ಗಿ ಅವರ ನಿವಾಸಕ್ಕೆ ಆಳ್ವಾಸ್ ನುಡಿಸಿರಿ ಸ್ವಾಗತ ಸಮಿತಿ ಪದಾಧಿಕಾರಿಗಳು ತೆರಳಿ ಸಮ್ಮೇಳನಕ್ಕೆ ಆಮಂತ್ರಣ ನೀಡಿದ ಸಂದರ್ಭದಲ್ಲಿ "ಸ್ವರೂಪ" ವಾರ್ಷಿಕ ಸಂಚಿಕೆಯ ಮೊದಲ ಪ್ರತಿಯನ್ನು ಕಲಬುರ್ಗಿ ಅವರಿಗೆ ಹಸ್ತಾಂತರಿಸಲಾಯಿತು.




ಸ್ವರೂಪ ವಾರ್ಷಿಕ ಸಂಚಿಕೆಯಲ್ಲಿ ಕನ್ನಡ, ಹವ್ಯಕ ಕನ್ನಡ, ಅರೆಗನ್ನಡ, ಹುಬ್ಬಳ್ಳಿ ಕನ್ನಡ, ಉತ್ತರ ಕನ್ನಡದ ಕನ್ನಡ, ತುಳು, ಶಿವಳ್ಳಿ ತುಳು, ಮಲೆಯಾಳಂ, ಹಿಂದಿ, ಆಂಗ್ಲಭಾಷೆ, ಮಣಿಪುರಿ, ಉರ್ದು, ಅರಬ್ಬಿ, ಕೊಂಕಣಿ, ಹೀಗೆ ವೈವಿಧ್ಯಮಯ ಭಾಷಾ ಪ್ರಬೇಧಗಳ ಲೇಖನಗಳಿವೆ. ಒಂದು ಆಕರ ಗ್ರಂಥ ರೂಪದಲ್ಲಿ ಈ ಬಾರಿಯ ಸ್ವರೂಪವನ್ನು ಹೊರತರಲಾಗಿದೆ ಎಂದು "ಸ್ವರೂಪ" ವಾಷರ್ಿಕ ವಿಶೇಷ ಸಂಚಿಕೆಯ ಸಂಪಾದಕ ಹರೀಶ್ ಕೆ.ಆದೂರು ಮಾಹಿತಿ ನೀಡಿದರು.

ಡಾ.ಧನಂಜಯ ಕುಂಬ್ಳೆ, ನಿತ್ಯಾನಂದ ಗಾಣಿಕ, ಧೀರೇಂದ್ರ ಜೈನ್ ಉಪಸ್ಥಿತರಿದ್ದರು.

0 comments:

Post a Comment